ಹಿಂದೂ ಅಮಾಯಕರ ಮೇಲೆ ದೌರ್ಜನ್ಯ : ವಿಜಯೇಂದ್ರ
ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನಾ ಸಭೆ

ಶಿವಮೊಗ್ಗ,ಅ.12: ಮುಸಲ್ಮಾನರ ತುಷ್ಟಿಕರಣಕ್ಕಾಗಿ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬಾರದು. ಘಟನೆಯಲ್ಲಿ ದೌರ್ಜನ್ಯ ಎಸಗಿದ ಅಲ್ಪಸಂಖ್ಯಾತರ ಬದಲಾಗಿ ಹಿಂದೂ ಯುವಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಶಾಸಕ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ. .
ಅವರು ಗುರುವಾರ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಗಿಗುಡ್ಡದ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವರ್ತನೆ ಸರಿಯಿಲ್ಲ. ಹಿಂದೂ ಸಮಾಜ ಶಾಂತಿಯಿಂದ ಇದೆ ಎಂದರೆ ಅದು ದೌರ್ಬಲ್ಯವಲ್ಲ. ಗೃಹಸಚಿವರು ಇದು ಸಣ್ಣ ಘಟನೆ ಎನ್ನುತ್ತಾರೆ. ಉಸ್ತುವಾರಿ ಸಚಿವರು ಖಡ್ಗವನ್ನೇ ಅಸಲಿಯಲ್ಲ ಎನ್ನುತ್ತಾರೆ. ಈದ್ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ತಪ್ಪಿತಸ್ಥರನ್ನು ಗಡಿಪಾರು ಮಾಡಿದರೆ ಸಾಲದು ಎಂದರು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಒಂದೇ ಧರ್ಮದ ಸಹಕಾರದೊಂದಿಗೆ ಅಕಾರಕ್ಕೆ ಬಂದಿದ್ದೇವೆ ಎಂಬ ಪಿತ್ತ ನೆತ್ತಿಗೇರಿದ್ದರೆ ಜನ ಮುಂದೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ. ಅಬ್ದುಲ್ ಕಲಾಂರಂತಹ ಅನೇಕ ಮುಸಲ್ಮಾನ ನಾಯಕರನ್ನು ಗೌರವಿಸಿದ ದೇಶ ಇದು. ಕಾಂಗ್ರೆಸ್ನವರ ಮಕ್ಕಳು, ಮರಿ ಮಕ್ಕಳೇ ಈ ತುಷ್ಟಿ ಕರಣ ನೀತಿಯನ್ನು ಕ್ಷಮಿಸುವುದಿಲ್ಲ. ಘಟನೆ ಸಣ್ಣದು ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ಆ ಘಟನೆಗೆ ಕಾರಣರಾದವರ ದೂರಾಲೋಚನೆ ದೊಡ್ಡ ದಿದೆ. ಬಿಜೆಪಿ ಎಂದೂ ಮುಸ್ಲಿಂ ವಿರೋಯಲ್ಲ ಎಂದರು.
ಸರಕಾರದ ಯೋಜನೆಯ ಲಾಭವನ್ನು ಮುಸ್ಲಿಂ ಬಾಂಧವರು ಕೂಡ ಪಡೆದಿದ್ದಾರೆ. ಇಲ್ಲೇ ಬೆಳೆದು, ಇಲ್ಲಿಯ ಅನ್ನ ತಿಂದು ಹೆತ್ತ ತಾಯಿಯನ್ನು ಹೊಡೆ ಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಪ್ರಕರಣ ನ್ಯಾಯಾಂಗ ತನಿಖೆ ಆಗಲಿ. ಯಎಪಿಐ ಅಡಿಯಲ್ಲಿ ಈ ಕೇಸನ್ನು ದಾಖಲಿಸಬೇಕು. ರಾಷ್ಟ್ರ ರಕ್ಷಣೆ ಪ್ರಶ್ನೆ ನಾವೆಲ್ಲ ಒಂದಾಗಬೇಕು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ವೈಚಾರಿಕತೆ, ಭಾರತೀಯತೆಯೇ ನಮ್ಮ ಹಿಂದುತ್ವದ ನೆಲೆಗಟ್ಟು, ಕಾಶ್ಮೀರ ಭಾರತದ ಮುಕುಟ. ಅದನ್ನು ಭಾರತದಲ್ಲಿ ಉಳಿಸಲು ಬಲಿದಾನ ಮಾಡಿ ಜನಸಂಘ ಕಟ್ಟಿ ರಾಷ್ಟ್ರೀಯತೆಯ ಪರವಾಗಿ ಹೋರಾಟ ಮಾಡಿದ ಪಕ್ಷ ನಮ್ಮದು. ಮುಸ್ಲಿಂ ತುಷ್ಟಿಕರಣ ನೀತಿಯನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಶಿವಮೊಗ್ಗವನ್ನು ಆತಂಕವಾದದ ಸ್ವರ್ಗ ಮಾಡಲು ಕೆಲವರು ಹೊರಟಿದ್ದರು. ಸರಣಿ ಕೊಲೆಗಳಾದರೂ ಕೂಡ ಹಿಂದೂಗಳು ಒಂದೇ ಒಂದು ಮುಸಲ್ಮಾನನ ಕೊಲೆ ಮಾಡಲಿಲ್ಲ ಎಂದರೆ ಅದು ಹಿಂದೂ ಸಹಿಷ್ಣುತೆ. ಪಿಎಫ್ಐ ಮತ್ತು ಎಸ್ಡಿಪಿಐ ರಾಗಿಗುಡ್ಡ ಗಲಭೆಯ ಹಿಂದೆ ಇದೆ ಎಂದು ಪೊಲೀಸ್ ಅಕಾರಿಗಳೇ ಹೇಳಿದ್ದಾರೆ. ಹಿಂದೂಗಳು ತಾಳ್ಮೆ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕೆಂದರು. ಮಾಜಿ ಶಾಸಕ ಮಾತನಾಡಿ, ಶಾಸಕಿ ಭಾರತಿ ಶೆಟ್ಟಿ ಮಾತನಾಡಿದರು.